ಈ ವಿಗ್ರಹವನ್ನು ೧೯೮೮ರಲ್ಲಿ ಹೈದರಾಬಾದಿಗೆ ತರಲಾಯಿತು. ಅದನ್ನು ಕೆರೆಯ ಮಧ್ಯೆ ಸಾಗಿಸುವಾಗ ಕೆರೆಯಲ್ಲಿ ಮುಳುಗಿತು. ಬಹಳ ಪ್ರಯತ್ನಗಳ ನಂತರ ೧೯೯೨ರಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಯಿತು.

ಮತ್ತೊಂದು ಅವತಾರ!
"ಅಲ್ಲಿ ನಿಂತಿದ್ದ ಹುಡುಗಿಯನ್ನು ನೋಡಿ
ನನ್ನ ಹೃದಯವು ಅರಳಿತು
ಅಲ್ಲಿಗೆ ಬಂದ ಅವಳ ಅಪ್ಪನನ್ನು ನೋಡಿ
ನನ್ನ ಕಾಲುಗಳು ಓಡಿತು!"
ಈ ಚುಟುಕವನ್ನು ನಾನು ರಚಿಸಿದ್ದು ೩-೪ ವರ್ಷಗಳ ಹಿಂದೆ. ನಾನು ಬೆಂಗಳೂರಿನ ಮಲ್ಲೇಶ್ವರಮ್-ನಲ್ಲಿ ಹಾಗೆ ಸುತ್ತಾಡುತ್ತಿದ್ದಾಗ, ೮ನೇ ಕ್ರಾಸ್ನಲ್ಲಿ ಒಬ್ಬ ಸುಂದರ ಹುಡುಗಿಯನ್ನು ನೋಡಿ ಹಾಗೆ ಅಲ್ಲೇ ನಿಂತಿದ್ದೆ. ತಕ್ಷಣ ಎಲ್ಲಿಂದಲೋ ಅವಳ ಅಪ್ಪ (ನನ್ನ ಅನಿಸಿಕೆ ಮಾತ್ರ, ಆ ಮನುಷ್ಯ ಅಪ್ಪನ ತರ ಕಾಣಿಸುತ್ತಿದ್ದರು) ಬಂದರು. ದೋಡ್ಡ ಮೀಸೆ ಬೆಳೆಸಿದ್ದ ಅವರು ನೋಡೊಕ್ಕೆ ಪೈಲ್ವಾನ್ ತರ ಇದ್ರು. ತಕ್ಷಣ ನಾನು ಅಲ್ಲಿಂದ ಜಾಗ ಕಾಲಿ ಮಾಡಿದೆ. ಈ ಘಟನೆಯನ್ನು ಚುಟುಕ ರೂಪದಲ್ಲಿ ಬರೆದಿದ್ದೇನೆ.